ತುಘ್ಲಕ

ಸಂಜೆಯಾಗಿತ್ತು ಇಡಿಯ ದೆಹಲಿ
ಸ್ತಬ್ದವಾಗಿತ್ತು ಎಲ್ಲೆಲ್ಲೂ
ತೆರೆದ ಬಾಗಿಲ ಖಾಲಿ ಮನೆಗಳು
ನಿನ್ನೆಮೊನ್ನೆಯ ವರೆಗೆ ಇಲ್ಲಿ
ಇಷ್ಟೊಂದು ಜನರಿದ್ದರೆಂದು
ನಂಬುವುದೆ ಕಷ್ಟವಾಗಿತ್ತು

ಇಬ್ಬರೇ ನಡೆದಿದ್ದರವರು
ದೊರೆ ಮತ್ತು ಪ್ರವಾಸಿ
ಎದಿರಾಗುವುದಕ್ಕೆ ಯಾರೂ ಇಲ್ಲ
ನಾಯಿಗಳೂ ಕೂಗುವುದಿಲ್ಲ
ಇಬ್ನ್ ಬಟೂಟಾ ಕೇಳಿದನು:
“ಅರಸ! ಏನಿದೆಲ್ಲದರ ಅರ್ಥ ?”

ಅರಸನೆಂದನು ನಕ್ಕು:
“ಚರಿತ್ರೆಯ ಕಾಲಘಟ್ಟಗಳಲ್ಲಿ ಕೆಲವೊಮ್ಮೆ
ಹೀಗಾಗುವುದು-ಈಗ
ಈ ಸಂಜೆಯ ಮೌನವನ್ನು ಸವಿ!
ಇನ್ನೊಂದು ದಿನ ಇದೇ ಬೀದಿಗಳು ತುಂಬುತ್ತವೆ
ಮತ್ತದೇ ಗುಂಪು ಅದೇ ಗುಲ್ಲು
ಸಾಧ್ಯವಿದ್ದರೆ ನಾನು
ಸಮುದ್ರವನ್ನು ಕೂಡ ಮೊಗೆಯುತ್ತಿದ್ದೆ
ಅದರ ತಳದಲ್ಲಿ ನಡೆಯಲು”

ನಂತರ ಇಬ್ನ್ ಬಟೂಟಾ ಒಬ್ಬನೇ
ದೇವರನ್ನು ಹೀಗೆ ಪ್ರಾರ್ಥಿಸಿಕೊಂಡ:
“ಮೌನವಿರುವ ಕಡೆ
ಮಾತುಗಳು ಹುಟ್ಟಲಿ
ಈ ಒಲೆಗಳು ಮತ್ತೆ
ಉರಿಯುವಂತೆ ಮಾಡು
ಸರ್ವಶಕ್ತನಾದ ಅಲ್ಲಾ
ಸಮುದ್ರದ ರಹಸ್ಯವನ್ನು
ಸರ್ವಾಧಿಕಾರಿಗಳಿಂದ ರಕ್ಷಿಸು !”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತ್ತವೆ ನೆನಪು
Next post ಮನಸ್ಸು

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

cheap jordans|wholesale air max|wholesale jordans|wholesale jewelry|wholesale jerseys